ಎಲ್ಲ ವಿಷಯಗಳ ತಾಯಿ ಗಣಿತ ಶಾಸ್ತ್ರ. ದೈನಂದಿನ ವ್ಯವಹಾರದಲ್ಲಿ ಗಣಿತವನ್ನು ತಿಳಿದವರು ಮಾತ್ರ ಜೀವನದಲ್ಲಿ ಸೋಲನ್ನು ಮೆಟ್ಟಿ ನಿಲ್ಲಬಲ್ಲರು. ವಿಶ್ವಶ್ರೇಷ್ಠ ಗಣಿತಜ್ಞರಲ್ಲಿ ಶ್ರೀನಿವಾಸನ್ ರಾಮಾನುಜಮ್ ಅಗ್ರಗಣ್ಯರು ಎಂದು ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕ ನಾಗರಾಜ್ ಶೆಟ್ಟಿ ಪ್ರತಿಪಾದಿಸಿದರು. ಅವರು ಸಂಸ್ಥೆಯಲ್ಲಿ ಆಯೋಜಿಸಿದ ಗಣಿತ ದಿನಾಚರಣೆಯ ಪ್ರಧಾನ ಭಾಷಣ ಮಾಡಿದರು.
---------------------------------------------------
ಗಣಿತ ಬಲ್ಲವ ಜಗ ಗೆಲ್ಲಬಲ್ಲ
ನಾಗರಾಜ್ ಶೆಟ್ಟಿ,
ಗಣಿತ ಶಿಕ್ಷಕರು
-------------------------------------------------
ಅಧ್ಯಾಪಕ ಉದಯ ಗಾಂವಕಾರ ಮಾತನಾಡುತ್ತ ಕೇವಲ ಮನುಷ್ಯರು ಮಾತ್ರವಲ್ಲ ಪ್ರಕೃತಿಯ ಪ್ರಾಣಿ ಪಕ್ಷಿಗಳು ಕೂಡ ಲೆಕ್ಕ ಹಾಕಿಯೇ ಜೀವನ ಮಾಡುತ್ತವೆ.ಲೆಕ್ಕ ಮರೆತ ಜಗತ್ತು ಬಾಳುವುದು ಕಷ್ಟಸಾಧ್ಯ ಎಂದು ಅಭಿಮತಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗಣಿತ ರಸಪ್ರಶ್ನೆ, ಗಣಿತ ಮಾದರಿ ತಯಾರಿಕೆ ಮತ್ತು ಗಣಿತಜ್ಞರ ಭಾವಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿ ವಿಜೇತರನ್ನು ಪುರಸ್ಕರಿಸಲಾಯಿತು.
ವಿಶ್ವ ಕಂಡ ಶ್ರೇಷ್ಠ ಗಣಿತಜ್ಞ ರಾಮಾನುಜಂ ಎಂಬ ವಿಷಯದ ಬಗ್ಗೆ ಕುಮಾರಿ ಶ್ರೀನಿಧಿ ಜಿ. ಹಾಗೂ ಬ್ರಾಹ್ಮೀಶ್ರೀ ಮಾತನ್ನಾಡಿದರು. ಏರ್ಪಡಿಸಿದ್ದ ಗಣಿತ ಮಾದರಿಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಚಂದ್ರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಗಣಿತ ಶಿಕ್ಷಕ ಉದಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಬಳೆಗಾರ ಸರ್ವರನ್ನು ಸ್ವಾಗತಿಸಿದರು. ಪೂರ್ಣಿಮಾ ಭಟ್ ವಂದಿಸಿದರು. ಹರ್ಷಿನಿ ತಂಡದವರು ಪ್ರಾರ್ಥಿಸಿದರು. ಕುಮಾರ್ ಜ್ಞಾನ ಪುತ್ರನ್ ಮತ್ತು ಶ್ರೀಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಿಕ್ಷಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:
ಗಣಿತ ದಿನ: ಬರೆಹಗಾರ್ತಿ ಪೂರ್ಣಿಮಾ ಕಮಲಶಿಲೆಯವರ ಪ್ರತಿಕ್ರಿಯೆ
![]() |
ಪೂರ್ಣಿಮಾ ಕಮಲಶಿಲೆ |
---------------------------------------
ಚಿತ್ರ ಸಂಪುಟ
*ಚಿತ್ರ ರಚನಾ ಸ್ಪರ್ಧೆ
ವಿಜೇತರಿಗೆ ಬಹುಮಾನ
ಮಾದರಿ ರಚನಾ ಸ್ಪರ್ಧೆ

-------------------------------------------
( ಬರೆಹ: ರಮಾನಂದ ನಾಯಕ, ಕನ್ನಡ ಭಾಷಾ ಶಿಕ್ಷಕರು)
No comments:
Post a Comment