Wednesday 26 February 2020

ಅದಿತಿ ಎಸ್ ಕುಲಕರ್ಣಿ -ಎಸ್ ಎಸ್ ಎಲ್ ಸಿ ಯಲ್ಲಿ ಕರ್ನಾಟಕ್ಕೆ ತೃತೀಯ


   
ಚಿಕ್ಕಂದಿನಿಂದಲೂ ಸಿದ್ಧಾಪುರ ಹೊಸಂಗಡಿ ಪರಿಸರದಲ್ಲಿ ಓದಿಕೊಂಡು ಬಂದ ನಮ್ಮ ಅದಿತಿ ಎಸ್ ಕುಲಕರ್ಣಿ
ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕೆ ಪಿ ಸಿ ಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಪ್ರೌಢಶಿಕ್ಷಣವನ್ನು 8ರಿಂದ 10ನೇ ತರಗತಿಯವರೆಗೆ ನಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಮುಗಿಸಿರುತ್ತಾರೆ.
ತನ್ನ ಅಸಾಧಾರಣ ಬುದ್ಧಿಶಕ್ತಿಯಿಂದ 623/625 ಅಂಕಗಳನ್ನು ಪಡೆದ ಇವರು ಕ್ರಮವಾಗಿ ಕನ್ನಡ – 125, ಇಂಗ್ಲೀಷ್ – 98, ಹಿಂದಿ - 100, ಗಣಿತ – 100,  ವಿಜ್ಞಾನ – 100, ಹಾಗೂ ಸಮಾಜ ವಿಜ್ಞಾನ – 100 ಅಂಕಗಳೊಂದಿಗೆ ತೇರ್ಗಡೆ ಹೊಂದಿ ಕರ್ನಾಟಕ ರಾಜ್ಯಕ್ಕೆ ತೃತೀಯಾ ರ್ಯಾಂಕ್ ಬಂದಿರುತ್ತಾರೆ.
ಇಂದು ಸರಕಾರಿ ಶಾಲೆಯೆಂದರೆ ಸದಾ ಮೂಗು ಮುರಿಯುತ್ತಿರುವ ಈ ಕಾಲ ಘಟ್ಟದಲ್ಲಿ ಇವರ ಹೆತ್ತವರು (ತಂದೆ ಶಶಿಕಾಂತ ಕುಲಕರ್ಣಿ ತಾಯಿ ಶ್ವೇತಾ ಕುಲಕರ್ಣಿ) ಕೆಪಿಸಿಎಲ್ ಹೊಸಂಗಡಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ (ಇಂಜಿನಿಯರ್) ತನ್ನ ಅದ್ವಿತೀಯ ಪ್ರತಿಭೆ ಹೊಂದಿರುವ ತನ್ನ ಮಗಳನ್ನು ಸರಕಾರಿ ಶಾಲೆಗೇ ಸೇರಿಸಬೇಕೆಂಬ ಇವರ ತೀರಾ ಇಚ್ಛಾ ಶಕ್ತಿ ಅವರ ಸರಳತನ ಮಾತ್ರವಲ್ಲ ಸರಕಾರಿ ಶಾಲೆಯ ಮೇಲಿಟ್ಟಿರುವ ಅಪಾರ ನಂಬಿಕೆ ಇಲ್ಲ್ಲಿ ವೇದ್ಯವಾಗುತ್ತದೆ.
ತರಗತಿಯಲ್ಲಿ ಸದಾ ಮುನ್ನಡೆ ಸಾಧಿಸುತ್ತಿರುವ ಕುಮಾರಿ ಅದಿತಿ ಎಸ್ ಕುಲಕರ್ಣಿಯವರು ಯಾವತ್ತೂ ತನ್ನ ಪ್ರೌಢಿಮೆಯನ್ನು ಪ್ರದರ್ಶನ ಮಾಡದೆ ಎಲ್ಲಾ ಸಹಪಾಠಿಗಳನ್ನೂ ನಗು ನಗುತ್ತಲೇ ಸ್ವೀಕರಿಸುವುದರ ಜೊತೆಗೆ ತನ್ನಲ್ಲಿರುವ ಅಪಾರ ಬುದ್ಧಿ ಶಕ್ತಿಯನ್ನು ಸದಾ ಹಂಚಿಕೊಳ್ಳುವ ಇವರ ಗುಣ ಮಹತ್ತರವಾದುದು .
ಕೇವಲ ಪಾಠ ಪ್ರವಚನಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಾದ ಹಿಂದೂಸ್ಥಾನಿ ಸಂಗೀತ, ಪೈಂಟಿಂಗ್, ನೃತ್ಯಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ  ಚೆಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿರುತ್ತಾರೆ. ಅಷ್ಟೇ ಏಕೆ ಸಾಮಾನ್ಯ ಜ್ಞಾನವನ್ನು ಕರತಲಾಮಲಕ  ಮಾಡಿಕೊಂಡಿರುವ ಇವರು ಒಂದು ವಿಶ್ವಕೋಶವಿದ್ದಂತೆ .
ತನ್ನ ಗುರುಹಿರಿಯರನ್ನು ಅಪಾರವಾಗಿ ಗೌರವಿಸುವ ಇವರು ಶಾಲೆಯಲ್ಲಿ ತನ್ನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗವನ್ನು , ಹಿರಿಯ ಕಿರಿಯ ಸಹಪಾಠಿಗಳನ್ನು ಪ್ರೀತಿಯಿಂದ ಕಾಣುವ ಗುಣ ಇವರದು. ಇಂತಹ ಅದ್ವಿತೀಯ ಗುಣವನ್ನು ಹೊಂದಿರುವ ಈ ನಮ್ಮ ಅದಿತಿ ಎಸ್ ಕುಲಕರ್ಣಿಯವರು ನಮ್ಮ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ.


No comments:

Post a Comment